Sunday, March 6, 2011

ಧರಣಿ- ವರುಣರ ಪ್ರಣಯ


ಧರಣಿ- ವರುಣರ ಪ್ರಣಯ

ಬರಗಾಲದಿಂದ ಬರಿದಾಗಿದ್ದವು ರೈತರ ಅನ್ನದ ಬಟ್ಟಲುಗಳು,
ಕಾತರದಿ ಮುಗಿಲೆಡೆಗೆ ನೋಡುತ್ತಿದ್ದವು ಅವ ನಯನಗಳು;
ಸುಡುವ ವಿರಹದ ಬೇಗೆಯಿಂದ ಧರಣಿಯು ಬಳಲಿರಲು,
ವರುಣನ ಸಮಾಗಮವ ಕಾಯುತ್ತಿತ್ತು ಅವಳೊಡಲು;



ಧರಣಿಯ ವಿರಹದ 
ಒಡಲುರಿಯು  ಮುಗಿಲು ಮುಟ್ಟಲು, 
ಉನ್ಮತ್ತನಾದ ವರುಣನು ಹರಿಸಿದ ಪ್ರೀತಿಯ ಹೊನಲು;
ವರುಣನರಿಸಿದ ಆ ಪ್ರೀತಿಯ ಹೊಳೆಯಲಿ,
ಮಿಂದು ಪುಳಕಿತಳಾದಳು ಧರಣಿಯು ಹರುಶದಲಿ;


ಅವರಿಬ್ಬರ ಈ ಮಿಲನದ  ಫಲದಿಂದ,
ಚಿಗುರೊಡೆದವು ಪೈರುಗಳು ಧರಣಿಯೊಡಲಿನಿಂದ;
ಸಾಲ ಮಾಡಿದ ರೈತನಿಂದ ತೀರಲವಳೆಲ್ಲ ಬಯಕೆಗಳು,
ದಿನದಿಂದ ದಿನಕೆ ಮೈದುಂಬಿ ಬೆಳೆದಳವಳು;




ಕಂಗೊಳಿಸುತ್ತಿದ್ದವಳ ಕಂಡು ಉನ್ಮತ್ತನಾದ ವರುಣನು, 
ಮಾಡಿದನವಳ ಮೇಲೆ ಮತ್ತೆ ಮತ್ತೆ ಆಕ್ರಮಣವನು;
ತತ್ತರಿಸಿದಳಾ ಅಬಲೆ ತಾಳಲಾರದೆ ಈ ಆಘಾತ,
ಪ್ರಸವಿಸುವ ಮೊದಲೆ ಆಯಿತವಳಿಗೆ ಗರ್ಭಪಾತ;


ನೋಡಿ ವರುಣನ ಹುಚ್ಚು ಪ್ರಣಯದಾರ್ಭಟ,
ಕುಸಿದು ಬಿತ್ತು ಅನ್ನದಾತರ ಸುಂದರ ಆಶಾಕಮ್ಮಟ; ಮಾಡಿದ ಸಾಲಕೆ ಬಡ್ಡಿಯನ್ನು ತೆರಲಾರದ,
ಅನ್ನದಾತನು, ನಿರ್ಧರಿಸಿ ಸಾವಿಗೆ ಶರಣಾದ;
ವರುಣ ಧರಣಿಯರ ಈ ಪ್ರಣಯದಾಟ,
ಮಿತಿಯಾದರೆ ಅನಾವೃಷ್ಠಿ, ಅತಿಯಾದರೆ ಅತೀವೃಷ್ಠಿ!!!!

-ಸತೀ


No comments:

Post a Comment